ಈ ಪ್ರಪಂಚದಲ್ಲಿ ನಾನು, ಕೇವಲ

ಈ ಪ್ರಪಂಚದಲ್ಲಿ ನಾನು ಕೇವಲ…
ಪ್ರಪಂಚ… ಅಂದರೆ ಏನು ಅಂತ ನಿನಗೆ ಗೊತ್ತಲ್ಲ…
ಕೇವಲ ನಿನ್ನನ್ನು ಮಾತ್ರ ನೀನು ಅಂತ ಕೂಗಬಹುದು.

ನಾವು ಮಾತಾಡಲ್ಲ.
ಆಡಿದರೂ ನಮಗೆ ನಮ್ಮ ಮಾತಿನ ಸಂಬಂಧ ಇರಲ್ಲ.
ನಾವು ಆಡಿದಕ್ಕಿಂತ ಬೇರೆ ಇನ್ನೇನೋ ನಮ್ಮ ಅರ್ಥ ಇರುತ್ತೆ.

ಅದು, ಕೆಲವು ಸಾರಿ,
(ನಾವು ಒಬ್ಬರೇ ಇರುವಾಗ), ನಮಗೆ
ಗೊತ್ತಾಗಿದೆಯಾ ಅಂತ
ಅನುಮಾನ ಬರುವುದುಂಟು, ಹೌದಲ್ಲಾ?

ಆಗ ನಿನ್ನ ಕಣ್ಣಲ್ಲಿ ತೇವ ಇರುತ್ತೆ.
ಆಗ ನಾವು ಸುಮ್ಮನೆ ಆಗುತ್ತೇವೆ.
ಆಗ ನಮಗೆ ಏನೋ ಗೊತ್ತಾಗುತ್ತೆ.
ಆಗ ನಿನ್ನ ರೆಪ್ಪೆಗಳ ಮೇಲೆ ರೆಪ್ಪೆ
ನಿಧಾನವಾಗಿ ನೆಮ್ಮದಿಯಾಗಿ ಊರುತ್ತೆ.
ತುಂಬ.
ನೀನು ನನ್ನ ಹೆಸರು ಹೇಳುತ್ತೀಯೆ.

ನಾನು ನನ್ನ ಹೆಸರಾಗಿ
ಅದು, ಅದೇ ಎಲ್ಲ ಬೇಕಾದ್ದು ಎಲ್ಲ
ಹೇಳಬೇಕಾದ್ದು, ಎಲ್ಲಾ ಆಗಿ
ನನ್ನಿಂದ ನಿನ್ನ ಹೆಸರಾಗಿ ಬರುತ್ತದೆ.
ಓ, ನಾವು ನಾವು ನೀನು ನಾನು ನಾವು ನಾವು.

ಈ ಪ್ರಪಂಚದಲ್ಲಿ ನಿನ್ನನ್ನು ಮಾತ್ರ
‘ನೀನು’ ಅಂತ ಕೂಗಬಹುದು,
ಅದೆಲ್ಲ ನಮಗೆ ಆಗುತ್ತಿರುವಾಗಲೇ
ಕಳೆದೂ ಹೋಗುತ್ತಿರುತ್ತದೆ.
ನಮಗೆ ಅದು ಆಗಲೇ ಗೊತ್ತಾಗಲ್ಲ.
ಗೊತ್ತಿರಲ್ಲ. ಆಮೇಲೆ, ಗೊತ್ತಾದಾಗ
ಗೊತ್ತಾದಾಗ
(ಮಾತೆಂಬುದು ಬರೀ ಸುಳ್ಳು)
ಹೇಗೆ ಎಂದು ನನಗೆ ಗೊತ್ತಿಲ್ಲ
ನಾನು ಬೇರೆ ನೀನು ಬೇರೆ
ಒಬ್ಬೊಬ್ಬರೇ ಆಗಿರುತ್ತೇವೆ,
ಆದರೆ ಈ ಪ್ರಪಂಚದಲ್ಲಿ ನನಗೆ ನೀನು ಮಾತ್ರವೇ
ನೀನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಪ್ಪವ್ವಾ ಉಪ್ಪು
Next post ಚಿತ್ರದುರ್ಗ ಜಿಲ್ಲೆಯ ಅವಿಸ್ಮರಣೀಯ ಸಾಹಿತ್ಯ ಸಿರಿ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys